ನಾನು ಸತ್ತರೆ ಸರ್ಕಾರವೇ ಹೊಣೆ : ಮಠ ನಿರ್ದೇಶಕ ಗುರುಪ್ರಸಾದ್ ರ ಡೆತ್ ನೋಟ್ !

Team Newsnap
1 Min Read

ಕೊರೋನಾ ಪಾಸಿಟಿವ್ ಬಂದು ಈಗ ಚಿಕಿತ್ಸೆ ಪಡೆಯುತ್ತಿರುವ ‘ ಮಠ ‘ ಚಿತ್ರದ ಖ್ಯಾತಿ ನಿರ್ದೇಶಕ ಗುರುಪ್ರಸಾದ್‌ ಸರ್ಕಾರದ ವಿರುದ್ದ ಕಿಡಿಕಾರಿ, ನಾನು ಕೊರೋನಾದಿಂದ ಸತ್ತರೆ ಸಿಎಂ ಯಡಿಯೂರಪ್ಪ ಸೇರಿದಂತೆ ಇತರ ರಾಜಕಾರಣಿಗಳು ಹೊಣೆ ಎಂದಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಆಗಿದೆ
ಗುರು ಪ್ರಸಾದ್ ಹೇಳಿದಿಷ್ಟು.

ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಒಂದುವೇಳೆ ನಾನು ಈ ಕೊರೊನಾದಿಂದ ಸತ್ತರೆ ಅದಕ್ಕೆ ಸರ್ಕಾರವೇ ಹೊಣೆ ಎಂದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಚಿತ್ರ ನಿರ್ದೇಶಕ ಗುರುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ನನ್ನ ಡೆತ್ ನೋಟ್ ಎಂದಿರುವ ಗುರು ಪ್ರಸಾದ್ ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಕೊರೋನಾದಿಂದ ಯಾರೇ ಮೃತಪಟ್ಟರು ಅದಕ್ಕೆ ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ವಿಜಯೇಂದ್ರ ನೇರ ಕಾರಣ. ಜನರ ಪ್ರಾಣ ಉಳಿಸಿ ಸ್ವಾಮಿ ಎಂದು ಕೋರಿದ್ದಾರೆ.

Share This Article
Leave a comment