ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಭಾನುವಾರ ದಾವಣಗೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಪಾಲಿಕೆ ಕಮೀಷನರ್ ವಿಶ್ವನಾಥ್ ಮಾಸ್ಕ್ ಜಾಗೃತಿ ಅಭಿಯಾನ ಮಾಡಿದರು.
ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಬೆಳಗ್ಗೆ ಜಿಲ್ಲಾಧಿಕಾರಿ ಹಾಗೂ ಎಸ್.ಪಿ ಹನುಮಂತರಾಯ ಮುಂದಾದರು. ಈ ವೇಳೆ ಎಸ್ಪಿ, ಮಾಸ್ಕ್ ಧರಿಸದ ವ್ಯಾಪಾರಿಯೊಬ್ಬರ ಕೆನ್ನೆಗೆ ಬಾರಿಸಿದ ಘಟನೆಯೂ ನಡೆದಿದೆ.
ಡಿ.ಸಿ ಮಹಾಂತೇಶ್ ಬೀಳಗಿ ಹಾಗೂ ಎಸ್.ಪಿ ಹನಮಂತರಾಯ ಮಾರುಕಟ್ಟೆಯಲ್ಲಿ ಜನರು ಮಾಸ್ಕ್ ಧರಿಸಿದ್ದಾರಾ ಎಂಬುದರ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ಕ್ಲಾಸ್ ತೆಗೆದುಕೊಂಡು. ನಿಯಮ ಉಲ್ಲಂಘಿಸಿದವರಿಗೆ ದಂಡವನ್ನೂ ವಿಧಿಸಲಾಯ್ತು.
ವ್ಯಾಪರಿಯೊಬ್ಬರು ಮಾಸ್ಕ್ ಧರಿಸದ್ದಕ್ಕೆ ದಂಡ ನಿಡದೇ ವಾಗ್ವಾದಕ್ಕೆ ಇಳಿದರು. ಆಗ ಎಸ್ಪಿ ಹನಮಂತರಾಯ ವ್ಯಾಪಾರಿಯ ಕೆನ್ನೆಗೆ ಬಾರಿಸಿ ದಂಡ ಕಟ್ಟುವಂತೆ ತಾಕೀತು ಮಾಡಿದರು. ಬಳಿಕ ವ್ಯಾಪಾರಿಯನ್ನು ಪೊಲೀಸರು ಸ್ಥಳದಿಂದ ಕರೆದೊಯ್ದರು.