ಮಂಡ್ಯದಲ್ಲಿ ವರುಣ ಆರ್ಭಟ – ಜನ ಜೀವನ, ಸಂಚಾರ ಸ್ಥಬ್ಧ: ವರ್ಷಧಾರೆಯಿಂದಲೇ ವರ್ಷಾರಂಭ

Team Newsnap
1 Min Read

ಮಂಡ್ಯದಲ್ಲಿ ಗುಡುಗು, ಸಡಿಲು ಸಹಿತ ವರುಣನ ಆರ್ಭಟ – ಹೊಸ ವರ್ಷದ ಮೊದಲ ಮಳೆ ಮಂಡ್ಯದಲ್ಲಿ ಬುಧವಾರ ಸಂಜೆ ಭಾರಿ‌ ಮಳೆ ಸುರಿದಿದೆ.

ಪ್ಲವ ನಾಮ ಸಂವತ್ಸರದ ಮೊದಲ ಮಳೆ ಇದಾಗಿದೆ. ಕಳೆದ ಒಂದು ತಿಂಗಳಿನಿಂದ ಸೂರ್ಯನ ಬಿಸಿಲಿಗೆ ತತ್ತರಿಸಿ ಹೋಗಿದ್ದ ಜಿಲ್ಲೆಗೆ ಮುಂಗಾರು ಮಳೆ ಈ ಶುಭಾರಂಭವು ತಂಪನೆರೆದಿದೆ. ವರ್ಷಧಾರೆಯಿಂದ ಹೊಸ ವರ್ಷ ಆರಂಭವಾಗಿರುವುದು ಜನರಲ್ಲಿ ಹರ್ಷ ತಂದಿದೆ.

rain

ಮೈಸೂರು, ಬೆಂಗಳೂರು, ಕೊಡಗು ಸೇರಿದಂತೆ ರಾಜ್ಯದ ಕೆಲವು ಭಾಗದಲ್ಲಿ ಭಾರಿ ಮಳೆಯಾಗಿದೆ. ಮಂಡ್ಯದಲ್ಲೂ ಕೂಡ ಗುಡುಗು, ಸಿಡಿಲಿನ ನಡುವೆಯೂ ಮಳೆ ಅಬ್ಬರ ಹೆಚ್ಚಾಗಿದೆ. ಮಂಡ್ಯದ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ.

ಈ ವರ್ಷದ ಮೊದಲ ಮಳೆಯಿಂದಾಗಿ ಜನ ಜೀವನ, ರಸ್ತೆ ಸಂಚಾರ ಸಂಪೂರ್ಣ ಸ್ಥಬ್ಧವಾಗಿದೆ. ಸಧ್ಯಕ್ಕೆ ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

Share This Article
Leave a comment