ನಾಳೆಯಿಂದ ಆರಂಭವಾಗಲಿರುವ ರಂಜಾನ್ ಹಬ್ಬಕ್ಕೆ ರಾಜ್ಯ ಸರ್ಕಾರ ಕೊರೋನಾ ಕಾರ್ಯಸೂಚಿಯನ್ನು ಪ್ರಕಟಿಸಿದೆ.
- ಕಂಟೇನ್ಮೆಂಟ್ ಝೋನ್ಗಳಲ್ಲಿರುವ ಮಸೀದಿಗಳು ಬಂದ್
- ಮುಂದಿನ ಆದೇಶದವರೆಗೆ ಕಂಟೇನ್ಮೆಂಟ್ ಝೋನ್ಗಳ ಮಸೀದಿ ಬಂದ್
- ಕಂಟೇನ್ಮೆಂಟ್ ಝೋನ್ ಹೊರಗಿನ ಮಸೀದಿಗಳಲ್ಲಿ ಮಾತ್ರ ಅವಕಾಶ
- ಉಪವಾಸ ಬಿಡುವಾಗ ಮಸೀದಿಗೆ ಆಹಾರ ವಸ್ತು ತರಬಾರದು
- ಉಪವಾಸವನ್ನು ಮನೆಯಲ್ಲಿಯೇ ಬಿಟ್ಟು ಬರಬೇಕು
- ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಡ್ಡಾಯ
- ಪ್ರಾರ್ಥನೆಗೂ ಮೊದಲು ಮಾಡುವ ವಝು ಸ್ವಚ್ಛತೆಗೆ ಪ್ರತ್ಯೇಕ ವ್ಯವಸ್ಥೆ
- ಸಾಮೂಹಿಕ ಕಾರ್ಪೆಟ್ ಬಳಸುವ ಬದಲು ಪ್ರಾರ್ಥನೆಗೆ ವೈಯಕ್ತಿಕ ಕಾರ್ಪೆಟ್ ಬಳಕೆಗೆ ಸೂಚನೆ
- ಪ್ರಾರ್ಥನೆಗೂ ಮೊದಲು ಕೇವಲ ಐದು ನಿಮಿಷ ಮೊದಲು ಮಾತ್ರ ಮಸೀದಿ ಓಪನ್ ಆಗಬೇಕು
- ನಮಾಜ್ ಮಾಡುವುದಕ್ಕೆ ಮೂರು ಪಾಳಿಯಲ್ಲಿ ಸಮಯ ನಿಗದಿ (ಮಧ್ಯಾಹ್ನ 12:45 – 01:15, 01:20 – 02:00, 02:30 – 03:00)