ನಿಧಿ ಆಸೆಗೆ ಶಿವಲಿಂಗ ಕದ್ದು ಕೊಂಡ ಹೋದ ದುಷ್ಕರ್ಮಿಗಳು – ಆತಂಕದಲ್ಲಿ ಗ್ರಾಮಸ್ಥರು

Team Newsnap
0 Min Read

ನಿಧಿಯ ಆಸೆಗಾಗಿ‌ ಪುರಾತನ ದೇಗುಲದಲ್ಲಿನ ಶಿವಲಿಂಗವನ್ನು ದುಷ್ಕರ್ಮಿಗಳು ಇದ್ದುಕೊಂಡ ಹೋದ‌ ಘಟನೆ ಮಂಡ್ಯ ತಾಲೂಕಿನ‌‌ ಹಲ್ಲೆಗೆರೆಯಲ್ಲಿ ಜರುಗಿದೆ.

ಹಲ್ಲೇಗೆರೆ ಗ್ರಾಮದಲ್ಲಿ ಮಧ್ಯರಾತ್ರಿ ನಡೆದ ಈ ಘಟನೆಯಲ್ಲಿ ಈಶ್ವರ ದೇವಸ್ಥಾನದನ ಲಿಂಗ ಕಿತ್ತು ಕಳ್ಳರು ಹೊತ್ತೋಯ್ದಿದ್ದಾರೆ.

shivalinga1

ಇಂದು ಬೆಳಿಗ್ಗೆ ಪೂಜಾರಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಲಿಂಗ ಕಳ್ಳತನದಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗರ್ಭಗುಡಿಯ ಲಿಂಗದ ಜಾಗದಲ್ಲಿ ನೆಲ ಅಗೆದು ಲಿಂಗ ತೆಗೆದು ಕೊಂಡು ಹೋಗಿದ್ದಾರೆ.

ಕೆರಗೋಡು ಪೊಲೀಸ್ ಠಾಣೆ ಪೋಲಿಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದ್ದಾರೆ.

Share This Article
Leave a comment