ಮುಷ್ಕರ ದಲ್ಲಿ ಪಾಲ್ಗೊಂಡಿದ್ದ ವಾಯುವ್ಯ ಸಾರಿಗೆ ನೌಕರನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿಯಲ್ಲಿ ಜರುಗಿದೆ.
ಶಿವಕುಮಾರ್ ನೀಲಾಗಾರ್ (40) ಎಂಬಾತನೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.
ಈ ಆತ್ಮಹತ್ಯೆಗೆ ಸಾರಿಗೆ ಅಧಿಕಾರಿಗಳ ನಿರಂತರ ಕಿರುಕುಳ ಕಾರಣ ಎಂದು ಹೇಳಲಾಗುತ್ತಿದೆ. 12 ವರ್ಷಗಳಿಂದಲೂ ಶಿವಕುಮಾರ್ ಕಂಡಕ್ಟರ್ – ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.
ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಟ್ಟ ಬೆನ್ನಲ್ಲೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲಿ ನೌಕರ ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.