ತಮಿಳುನಾಡಿನಲ್ಲಿ ಖುಷ್ಬೂ ಚುನಾವಣಾ ಪ್ರಚಾರ….! ರಸ್ತೆ ಬದಿ ಅಂಗಡಿಯಲ್ಲಿ ದೋಸೆ ಮಾಡಿದ ಬಿಜೆಪಿ ನಾಯಕಿ…!!
ತಮಿಳುನಾಡಿನ ರಾಜಕಾರಣಕ್ಕೆ ಸಾಕಷ್ಟು ವಿಶೇಷತೆ ಇದೆ. ಸಿನಿಮಿಯ ರೀತಿಯಲ್ಲಿ ರಾಜಕಾರಣ ಮಾಡೋದು ಇಲ್ಲಿ ನೀರುಕುಡಿದಷ್ಟೇ ಸುಲಭ. ಡಿಎಂಕೆ ಅಭ್ಯರ್ಥಿ ಚುಣಾವಣೆ ಪ್ರಚಾರದ ವೇಳೆ ಪಾತ್ರೆ ತೊಳೆದು ಸುದ್ದಿ ಮಾಡಿದರು. ಇಂದು ಬಿಜೆಪಿ ಅಭ್ಯರ್ಥಿ, ನಟಿ ಖುಷ್ಬೂ ದೋಸೆ ಹಾಕಿ ಮತದಾರರ ಮನಗೆಲ್ಲೋ ಪ್ರಯತ್ನ ಮಾಡಿದರು.
ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರೋ ಬಿಜೆಪಿಯೂ ಅಧಿಕಾರ ಹಿಡಿಯುವ ಕನಸಿನಲ್ಲಿದೆ.
ಈ ಮಧ್ಯೆ ಬಿಜೆಪಿಯ ಎರಡು ಸ್ಟಾರ್ ಅಭ್ಯರ್ಥಿಗಳು ಎನ್ನಿಸಿಕೊಂಡಿರೋ ಅಣ್ಣಾಮಲೈ ಮತ್ತು ನಟಿ ಖುಷ್ಬೂ ಪೈಕಿ ಇಂದು ನಟಿ ಖುಷ್ಬೂ ಚುನಾವಣಾ ಪ್ರಚಾರದ ವೇಳೆ ದೋಸೆ ಅಂಗಡಿಯಲ್ಲಿ ದೋಸೆ ಹಾಕುವ ಮೂಲಕ ಮತದಾರರ ಮನಗೆಲ್ಲುವ ಸರ್ಕಸ್ ಮಾಡಿದ್ದಾರೆ.
ಚೈನ್ನೈ ನ ಥಂಡರ್ ಲೈಟ್ಸ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಖುಷ್ಬೂ ಸುಂದರ್ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಅಷ್ಟೇ ಅಲ್ಲ ಪ್ರಚಾರದ ವೇಳೆ ಪುಟ್ಟ ಶಿಶುವೊಂದನ್ನು ಎತ್ತಿ ಮುದ್ದಾಡುವ ಮೂಲಕ ನೆರೆದವರ ಮನಗೆದ್ದಿದ್ದಾರೆ.
ಅಷ್ಟೇ ಅಲ್ಲ ಪ್ರಚಾರದ ಮಧ್ಯೆ ದೋಸೆ ಅಂಗಡಿಗೆ ಭೇಟಿ ನೀಡಿ ದೋಸೆ ಹಾಕಿ, ಬಳಿಕ ರಸ್ತೆ ಬದಿಯಲ್ಲೇ ದೋಸೆ ಸವಿದು ಜನರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಕಮಲಕ್ಕೆ ನೆಲೆಕಲ್ಪಿಸಲು ಸರ್ಕಸ್ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ 2021 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದು, 234 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನು ಎಐಎಡಿಎಂಕೆ ಬಿಜೆಪಿಗೆ ಬಿಟ್ಟುಕೊಂಡಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ