ಮೇಲುಕೋಟೆ ವೈರಮುಡಿ ಬ್ರಹ್ಮ ರಥೋತ್ಸವ ಕ್ಕೆ ಕ್ಷಣ ಗಣನೆ ಆರಂಭವಾಗಿದೆ.
ಮಂಡ್ಯದ ಖಜಾನೆಯಿಂದ ಬುಧವಾರ ಬೆಳಿಗ್ಗೆ ವೈರಮುಡಿ ಉತ್ಸವದ ಆಭರಣಗಳನ್ನು ಸಂಜೆ ವೇಳೆ ಮೇಲುಕೋಟೆಗೆ ತರಲಾಯಿತು.
ಮೇಲುಕೋಟೆ ಚಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವದ ಅಂಗವಾಗಿ ದೇವಾಲಯದ ಒಳಭಾಗದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹಾಗೂ ಜಿಲ್ಲಾಧಿಕಾರಿ ಅಶ್ವಥಿ, ಎಸ್.ಪಿ. ಅಶ್ವಿನಿ ಮತ್ತಿತರ ಅಧಿಕಾರಿಗಳ ಸಮ್ಮುಖದಲ್ಲಿ ಆಭರಣಗಳ ಪರ್ಕಾವಣೆ (ಪರಿಶೀಲನೆ) ನಡೆಸಯಿತು.
ರಾತ್ರಿ 9 ಗಂಟೆ ವೇಳೆಗೆ ಮೇಲುಕೋಟೆ ಯಲ್ಲಿ ವೈರಮುಡಿ ಉತ್ಸವ ಆರಂಭವಾಗಲಿದೆ