February 23, 2026

Newsnap Kannada

The World at your finger tips!

nati s

ಬತ್ತ ನಾಟಿ ಮಾಡಿದ ಶ್ರೀರಂಗಪಟ್ಟಣ ತಹಸೀಲ್ದಾರ್- ರೈತರಿಗೆ ನೆರವಾದ ಮಹಿಳಾ ಅಧಿಕಾರಿ

Spread the love

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಮಹಿಳಾ ತಹಸೀಲ್ದಾರ್ ಅಧಿಕಾರಿಯೊಬ್ಬರು ಬತ್ತದ ಗದ್ದೆಯಲ್ಲಿ ನಾಟಿ ಮಾಡಿ ಜನರ ಮನಗೆದ್ದಿದ್ದಾರೆ.‌

ಶ್ರೀರಂಗಪಟ್ಟಣದ ತಹಸೀಲ್ದಾರ್ ರೂಪ ಮೇಡಂ‌ ನಗುವನಹಳ್ಳಿ ಗ್ರಾಮದ ನೀರು ತುಂಬಿರುವ ಭತ್ತದ ಗದ್ದೆಯಲ್ಲಿ ರೈತರೊಂದಿಗೆ ಸೇರಿ ಭತ್ತದ ಪೈರಿನ ನಾಟಿ ಮಾಡಿದರು.

ನಗುವನಹಳ್ಳಿಯಲ್ಲಿ ಶನಿವಾರ ತಾಲೂಕು ಆಡಳಿತದಿಂದ ಆಯೋಜಿಸಿದ ಅಧಿಕಾರಿಗಳ ನಡೆ ಹಳ್ಳಿ ಕಡೆ ಹೆಸರಿನ‌ ಗ್ರಾಮ ವಾಸ್ತವ್ಯದ ವೇಳೆ ರೈತರೊಬ್ಬರ ಜಮೀನಿನಲ್ಲಿ ನಾಟಿ ಹಾಕಿ, ಕಳೆ ಕಿತ್ತರು ರೂಪ ಮೇಡಂ‌

ತಾಲೂಕಿನ ರೈತರೊಂದಿಗೆ ಸೌಜನ್ಯದ ಒಡನಾಟ ಇಟ್ಟುಕೊಂಡು ಕೆಲಸ   ಮಾಡುತ್ತಿರುವ ಈ ಮಹಿಳಾ ಅಧಿಕಾರಿ ಇದೀಗ ಕ್ಷೇತ್ರದ ರೈತರ ನೆಚ್ಚಿನ ಅಧಿಕಾರಿಯಾಗಿ ಜನಸ್ನೇಹಿಯಾಗಿದ್ದಾರೆ.

error: Content is protected !!