October 18, 2024

Newsnap Kannada

The World at your finger tips!

kadane1

ಹಲಗೂರು ಬಳಿ ಕಾಡಾನೆ ತುಳಿತಕ್ಕೆ ವೃದ್ಧ ಬಲಿ

Spread the love

ಶಿವರಾತ್ರಿಹಬ್ಬ ಪ್ರಯುಕ್ತ ಮನೆಯಿಂದ ರೈತನೊಬ್ಬ ದೇವಸ್ಥಾನಕ್ಕೆ ಹೋಗುವ ವೇಳೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಘಟನೆ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಳವಳ್ಳಿ ತಾಲ್ಲೂಕಿನ ಸೊಲಬದೊಡ್ಡಿ ಗ ಗ್ರಾಮದ ಮುನಿನಂಜಯ್ಯ(63) ಮೃತಪಟ್ಟ ವ್ಯಕ್ತಿ.

kadane

ನಿನ್ನೆ ರಾತ್ರಿ 10ಗಂಟೆವೇಳೆ ಬಸವೇಶ್ವರ ದೇವಸ್ಥಾನಕ್ಕೆ ಭಜನೆಗೆ ಹೋಗುತ್ತಿದ್ದ ಕಾಡಾನೆ ದಾಳಿನಡೆಸಿ ಸೊಂಡಿನಲ್ಲಿ ಹೊಡೆದಿದ್ದ ಕೆಳೆಗೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ

ಸ್ಥಳಕ್ಕೆ ಕಾವೇರಿ ವನ್ಯಜೀವಿ ಡಿಸಿಎಫ್ ಡಾ.ರಮೇಶ್ , ಎಸಿಎಫ್ ಅಂಕರಾಜು,
ವಲಯ ಅರಣ್ಯಾಧಿಕಾರಿ ಮಹದೇವಸ್ವಾಮಿ, ಅಸಿಫ್ ಅಹಮದ್, ಉಪವಲಯಾರಣ್ಯಾಧಿಕಾರಿ ನಂದೀಶ್ , ಮಳವಳ್ಳಿ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಧನರಾಜ್ , ಸಬ್ ಇನ್ಸ್ ಪೆಕ್ಟರ್ ಪುರುಷೋತ್ತಮ ಬೇಟಿ ನೀಡಿ ಪರಿಶೀಲನೆ ನಡೆಸಿದರು
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲುಮಾಡಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!