ಯಡಿಯೂರಪ್ಪ ಭ್ರಷ್ಟ , ಸಿದ್ದರಾಮಯ್ಯ ಭ್ರಷ್ಟರಲ್ಲ: ಯುವತಿಯೊಂದಿಗೆ ಏಕಾಂತ ಮಾತುಕತೆಯಲ್ಲಿ ರಮೇಶ್ ಹೇಳಿದ್ದು….

Team Newsnap
1 Min Read

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಇನ್ನೂ ಹಸಿ ಇರುವಾಗಲೇ ಮತ್ತೊಂದು ವಿವಾದ ಸುಳಿಗೆ ಸಿಲುಕಿ, ಬಿಜೆಪಿ ಗೆ ಮತ್ತಷ್ಟು ಮುಜುಗುರ ತಂದಿದ್ದಾರೆ.

ರಾಸಲೀಲೆಯ ಸಂಗಾತಿ ಯುವತಿ ಜೊತೆ ರಮೇಶ್ ಜಾರಕಿಹೊಳಿ ಏಕಾಂತದಲ್ಲಿ ಮಾತನಾಡಿರುವ ಆಡಿಯೋ ಈಗ ವೈರಲ್ ಆಗಿದೆ. ಅದರಲ್ಲಿ ಬಿಜೆಪಿ ನಾಯಕ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭ್ರಷ್ಟ ಆದರೆ ಸಿದ್ದರಾಮಯ್ಯ ಭ್ರಷ್ಟ ನಲ್ಲ ಎಂದಿದ್ದಾರೆ.

ಯುವತಿಯೊಂದಿಗೆ ಈ ಹಿಂದೆ ಏಕಾಂತದಲ್ಲಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿರುವುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಸಿಎಂ ಯಡಿಯೂರಪ್ಪ ಭ್ರಷ್ಟ ಎಂದು ಬಿಜೆಪಿ ಪ್ರಭಾವಿ ನಾಯಕ ಆಡಿರುವ ಮಾತನ್ನು ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಸಜ್ಜಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭ್ರಷ್ಟ ಎಂದು ಅವರದ್ದೇ ಸಂಪುಟದ ಸಹೋದ್ಯೋಗಿ ಮಾತನಾಡಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಯಲೇಬೇಕು. ಜೊತೆಗೆ ಸಿಎಂ ಹಾಗೂ ಮಾಜಿ ಸಚಿವರನ್ನು ವಿಚಾರಣೆಗೊಳಪಡಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಲಿದೆ ಎಂದು ತಿಳಿದು ಬಂದಿದೆ.

ಅವನು ಸತ್ಯ ಹೇಳಿದ್ದಾನೆ:

ರಮೇಶ್ ಜಾರಕಿಹೊಳಿ ಅವರು ಆಡಿದ್ದಾರೆ ಎನ್ನಲಾದ ವಿಷಯದ ಬಗ್ಗೆ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪ್ರತಿಕ್ರಿಯೆ ನೀಡಿ, ಅವನು ಸತ್ಯವನ್ನೇ ಹೇಳಿದ್ದಾನೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ ಎಂದಿದ್ದಾರೆ.

Share This Article
Leave a comment