ಬೆಂಗಳೂರು: ಆದರ್ಶ ವಿದ್ಯಾಲಯದಲ್ಲಿ 2025-26ನೇ ಸಾಲಿನ 6ನೇ ತರಗತಿಯ ಪ್ರವೇಶಾತಿಗಾಗಿ ಅರ್ಜಿ ಸ್ವೀಕಾರ ಪ್ರಾರಂಭವಾಗಿದೆ. ಈ ಪ್ರವೇಶಕ್ಕಾಗಿ ಅರ್ಜಿಗಳನ್ನು 2025ರ ಫೆಬ್ರವರಿ 14ರಿಂದ ಸಲ್ಲಿಸಲು ಅವಕಾಶವಿದ್ದು, ಆಸಕ್ತ ವಿದ್ಯಾರ್ಥಿಗಳು 2025ರ ಫೆಬ್ರವರಿ 28ರೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಪ್ರಮುಖ ಸೂಚನೆಗಳು: ಅರ್ಹತೆ ಪರಿಶೀಲನೆ: ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಜಾಹಿರಾತು ಮತ್ತು ಸೂಚನೆಗಳನ್ನು ಓದಿ, ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು.ಅರ್ಹ ವಿದ್ಯಾರ್ಥಿಗಳು: ಕೇವಲ ಕರ್ನಾಟಕ ರಾಜ್ಯದ ನಿವಾಸಿ ವಿದ್ಯಾರ್ಥಿಗಳಿಗಷ್ಟೇ ಅರ್ಜಿ ಸಲ್ಲಿಸಲು ಅವಕಾಶ. 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇತರ ರಾಜ್ಯದ ವಿದ್ಯಾರ್ಥಿಗಳು ಅಧಿಸೂಚನೆಯಲ್ಲಿ ಹೇಳಿದಂತೆ ಅಗತ್ಯ ಅರ್ಹತೆ ಮತ್ತು ದಾಖಲೆಗಳನ್ನು ಹೊಂದಿರಬೇಕು. ಸ್ಥಳೀಯ ಅರ್ಹತೆ: ಆದರ್ಶ ವಿದ್ಯಾಲಯವಿರುವ ಬ್ಲಾಕ್ಗಳಲ್ಲಿಯೇ ವಾಸಿಸುವ ಅಥವಾ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಬೇರೆ ಬ್ಲಾಕ್ನ ವಿದ್ಯಾರ್ಥಿಗಳು ಅಧಿಸೂಚನೆಯನ್ವಯ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಶಾಲಾ ಆಯ್ಕೆ: ಕರ್ನಾಟಕದ ವಿದ್ಯಾರ್ಥಿಗಳು ಕೇವಲ ಒಂದು ಆದರ್ಶ ವಿದ್ಯಾಲಯವನ್ನು ಮಾತ್ರ ಆಯ್ಕೆ ಮಾಡಬೇಕು.ಪೋಷಕರ ಸಂಪರ್ಕ ಸಂಖ್ಯೆ: ಅರ್ಜಿ ಸಲ್ಲಿಸುವಾಗ ಪೋಷಕರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಯನ್ನು ನೀಡಬೇಕು, ಏಕೆಂದರೆ ಎಲ್ಲಾ ಪ್ರಮುಖ ಮಾಹಿತಿ ಆ ಸಂಖ್ಯೆಗೇ ಕಳುಹಿಸಲಾಗುತ್ತದೆ.SATS ಸಂಖ್ಯೆ: ಅಭ್ಯರ್ಥಿಯು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ SATS ಸಂಖ್ಯೆಯನ್ನು ಪಡೆಯಬೇಕು. SATS ಸಂಖ್ಯೆ ಇಲ್ಲದಿದ್ದರೆ, ತಮ್ಮ ಶಾಲಾ ಮುಖ್ಯಶಿಕ್ಷಕರನ್ನು ಸಂಪರ್ಕಿಸಿ ಪಡೆದು, ನಂತರವೇ ಅರ್ಜಿ ಸಲ್ಲಿಸಬೇಕು. ದಾಖಲೆಗಳ ಸ್ಕ್ಯಾನ್ ಪ್ರತಿಗಳು: ಆನ್ಲೈನ್ ಅರ್ಜಿಯೊಂದಿಗೆ ಅನಿವಾರ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು. ಈ ಪ್ರತಿಗಳು jpg ಅಥವಾ jpeg ಸ್ವರೂಪದಲ್ಲಿ 300KB ಗಾತ್ರದೊಳಗಿರಬೇಕು. ಇದನ್ನು ಓದಿ -ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಿಹಿ ಸುದ್ದಿ: ಬಾಕಿಯಿದ್ದ 3 ತಿಂಗಳ ಹಣ ಶೀಘ್ರವೇ ಖಾತೆಗೆ ಜಮೆ
ಆಸಕ್ತ ವಿದ್ಯಾರ್ಥಿಗಳು ಈ ಎಲ್ಲಾ ಮಾಹಿತಿಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ದಿಷ್ಟ ದಿನಾಂಕದೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
Like this: Like Loading...
Continue Reading
error: Content is protected !!
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು