ದಿಢೀರ್ ಎಂದು ರೈತರ ಪರವಾಗಿ ಕಾಳಜಿ ತೋರಿರುವ ಮಾಜಿ ಸಂಸದೆ, ನಟಿ ರಮ್ಯಾ ಕಿಸಾನ್ ದಿನದ ಅಂಗವಾಗಿ ಮಧ್ಯಾಹ್ನದ ಊಟವನ್ನು ತ್ಯಜಿಸಿದ್ದಾ ರಂತೆ.
ಇನ್ಸ್ಟಾ ಗ್ರಾಂನಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ರಮ್ಯಾ ಇಂದು ರೈತರ ದಿನಾಚರಣೆ. ರೈತರನ್ನು ಬೆಂಬಲಿಸಿ ತಾವು ಒಂದು ಹೊತ್ತಿನ ಊಟವನ್ನು ತ್ಯಜಿಸಿದ್ದೇನೆ ಎಂದು ಹೇಳಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ಇಡೀ ರೈತ ಸಮೂಹ ಆಗಸ್ಟ್ 9 ರಿಂದ ದೆಹಲಿ ಬಳಿ ಮುಷ್ಕರ ನಡೆಸಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ ರೈತರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದಾರೆ.
ಇದು ಸೂಟ್ ಬೂಟಿನ ಸರ್ಕಾರ. ಕಾರ್ಪೋರೆಟ್ ಪರವಾಗಿರುವ ಈ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ರಮ್ಯಾ ಹೇಳಿದ್ದಾರೆ.