March 31, 2025

Newsnap Kannada

The World at your finger tips!

, suicide, harrasment , crime

ಒಂದೇ ಕುಟುಂಬದ ನಾಲ್ವರು ವಿಷ ಸೇವನೆ : ಓರ್ವ ಸಾವು

Spread the love

ಚಾಮರಾಜನಗರ : ಮಲೆಮಾದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ವರು ವಿಷ ಸೇವನೆ ಮಾಡಿರುವ ಘಟನೆ ನಡೆದಿದೆ.

ಕೆ ಆರ್ ನಗರ ತಾಲೂಕಿನ ಚಂದಗಾಲು ಗ್ರಾಮದ ಮಹಾದೇವ ನಾಯಕ ಮೃತ ದುರ್ದೈವಿ .

ಪ್ರಕರಣದ ವಿವರ :

ಮಹದೇವ ನಾಯಕರ ಮೊಮ್ಮಗಳು ರಿಷಿಕಾ ಅನ್ಯ ಕೋಮಿನ ಯುವಕನ ಜೊತೆ ಪ್ರೀತಿ ಮಾಡುತ್ತಿದ್ದು ,ಯುವಕ ರಿಷಿಕ ಜೊತೆಗಿರುವ ಸಂದರ್ಭದಲ್ಲಿ ನಗ್ನ ವಾಗಿರುವ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡು ಸ್ನೇಹಿತರು ಹಾಗೂ ಇತರರಿಗೆ ತೋರಿಸಿಕೊಂಡು ಕುಟುಂಬದವರನ್ನು ಬ್ಲಾಕ್ ಮೇಲ್ ಮಾಡಿದ್ದಾನೆ.

ಈ ವಿಚಾರವಾಗಿ ಗಲಾಟೆಯು ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ನೀಡಲಾಗಿದ್ದು , ಆದರೆ ಕೆ ಆರ್ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳದೆ ಹುಡುಗನನ್ನು ಕರೆಸಿ ವಿಚಾರ ಮಾಡುವುದಾಗಿ ತಿಳಿಸಿದ್ದಾರೆ.

ನಮಗೆ ನ್ಯಾಯ ಸಿಗುವುದಿಲ್ಲ ಎಂದು ಹೆದರಿಕೊಂಡ ಕುಟುಂಬದ ಸದಸ್ಯರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗೋಣ ಎಂದು ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದಲೇ ಗ್ರಾಮದಿಂದ ತೆರಳಿ ,ಶನಿವಾರ ಬೆಳಗ್ಗೆ ತಾಳು ಬೆಟ್ಟದ ಸಮೀಪ ವಿಷ ಸೇವನೆ ಮಾಡಿದ್ದಾರೆ.

ವಿಷ ಸೇವನೆಯಿಂದ ಮಹದೇವ ನಾಯಕ ಸ್ಥಳದಲ್ಲಿಯೇ ಮೃತಪಟ್ಟಿದ್ದು , ಉಳಿದಂತ ಮೊಮ್ಮಗಳಾದ ರಿಷಿಕ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ ಸಭೆ’ ಜೂ.13ರಂದು ನಿಗದಿ 

ಗೌರಮ್ಮ ಮತ್ತು ಅನುಸೂಯರವರು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಿಸಿ ,ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ .

Copyright © All rights reserved Newsnap | Newsever by AF themes.
error: Content is protected !!