Trending

‘ಒಂದು ದೇಶ, ಒಂದು ಚುನಾವಣೆ’ಗಾಗಿ ಕೇಂದ್ರ ಸರ್ಕಾರ 3 ಮಸೂದೆಗಳನ್ನು ಮಂಡಿಸಲು ಸಿದ್ಧ

ನವದೆಹಲಿ: ನರೇಂದ್ರ ಮೋದಿ ಸರ್ಕಾರವು ‘ಒಂದು ದೇಶ-ಒಂದು ಚುನಾವಣೆ’ ಯೋಜನೆಯನ್ನು ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಉದ್ದೇಶಕ್ಕೆ ಸಂಬಂಧಿಸಿದ ಮೂರು ಮಸೂದೆಗಳನ್ನು ಮಂಡಿಸಲು ನಿರ್ಧರಿಸಿದೆ.

ಕೇಂದ್ರ ಸರ್ಕಾರವು ‘ಒಂದು ದೇಶ-ಒಂದು ಚುನಾವಣೆ’ ಕಾರ್ಯಚರಣೆಯ ನೆರವಿಗೆ ಬರುವಂತೆ, ಸಂವಿಧಾನದ ತಿದ್ದುಪಡಿ ಮಾಡಬೇಕಾಗಿರುವ ಎರಡು ಮಸೂದೆಗಳನ್ನು ಒಳಗೊಂಡಂತೆ ಒಟ್ಟಾರೆ ಮೂರು ಮಸೂದೆಗಳನ್ನು ತರುತ್ತಿದೆ. ಇದಕ್ಕಾಗಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯ ಶಿಫಾರಸುಗಳಿಗೆ ಸರ್ಕಾರಿ ಒಪ್ಪಿಗಿಯನ್ನು ಪಡೆದಿದೆ.

ಕೋವಿಂದ್ ಸಮಿತಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸು ಮಾಡಿದ್ದು, 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸುಗಮ ಮಾರ್ಗವನ್ನು ಸೂಚಿಸಿದೆ.

ಈ ಯೋಜನೆಯು 2029ರೊಳಗೆ ಜಾರಿಗೆ ಬರಬೇಕಾದರೆ, 17 ರಾಜ್ಯಗಳಲ್ಲಿ ಅಸೆಂಬ್ಲಿಗಳ ಅಧಿಕಾರಾವಧಿ ಮೂರು ವರ್ಷಕ್ಕಿಂತ ಕಡಿಮೆ ಇರುವ ಸಂದರ್ಭವಿದೆ. ಸರ್ಕಾರವು 15 ತಿದ್ದುಪಡುವಗಳನ್ನು ಸಂವಿಧಾನಕ್ಕೆ ಸೇರಿಸಲು ಶಿಫಾರಸು ಮಾಡಿದೆ.

ಮಸರುದೆಯ ಮುಖ್ಯ ಅಂಶಗಳು:

  1. ಏಕಕಾಲಕ್ಕೆ ಚುನಾವಣೆ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ಒಂದೇ ಕಾಲದಲ್ಲಿ ನಡೆಸಲು ಸಂಬಂಧಿಸಿದ ತಿದ್ದುಪಡಿ.
  2. ರಾಜ್ಯಗಳ ಒಪ್ಪಿಗೆ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯಗಳಲ್ಲಿ ಕನಿಷ್ಠ 50% ಒಪ್ಪಿಗೆ ಅಗತ್ಯ.
  3. ಕೇಂದ್ರಾಡಳಿತ ಪ್ರದೇಶಗಳ ವ್ಯವಸ್ಥೆ: ಪುದುಚೇರಿ, ದೆಹಲಿ ಮತ್ತು ಜಮ್ಮು-ಕಾಶ್ಮೀರದ ವಿಧಾನಸಭೆಗಳನ್ನು ಇತರ ರಾಜ್ಯಗಳ ವಿಧಾನಸಭೆಗಳ ಕಾಲಾವಧಿಯೊಡನೆ ಸಮೀಕರಿಸುವ ಬದಲು.

ಇದನ್ನು ಓದಿ – KSRTC ಬಸ್ ಕಂಟೈನರ್ ಗೆ ಡಿಕ್ಕಿಯಾಗಿ 20 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಈ ಮಸೂದೆಯ ಅಂಗೀಕಾರಕ್ಕೆ ತೀವ್ರ ರಾಜಕೀಯ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ, ಏಕೆಂದರೆ ವಿಪಕ್ಷಗಳು ಮತ್ತು ‘ತಟಸ್ಥ’ ಪಕ್ಷಗಳು ಇದನ್ನು ವಿರೋಧಿಸುತ್ತಿವೆ.

Team Newsnap
Leave a Comment

Recent Posts

ಸಮೀರ್ ಆಚಾರ್ಯ ದಂಪತಿ ಗಲಾಟೆ: ಪೊಲೀಸ್ ಠಾಣೆಯಲ್ಲಿ ವಿಚಾರಣೆ

ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಪತ್ನಿ ಶ್ರಾವಣಿ ನಡುವೆ ದಾಂಪತ್ಯ ಕಲಹ ಉಂಟಾಗಿದ್ದು,ಈ ಜೋಡಿ… Read More

September 30, 2024

ಗಂಡು ಮಗುವನ್ನು ಜೀವಂತವಾಗಿ ಹೂತು ಹಾಕಿದ ಅಮಾನವೀಯ ಘಟನೆ

ಬೆಂಗಳೂರು: ಬೆಂಗಳೂರಿನಲ್ಲಿ ಕಟಕಟಿಯ ಘಟನೆ ಸಂಭವಿಸಿದ್ದು, ಜೀವಂತ ಗಂಡು ಮಗುವನ್ನು ನಿರ್ಜನ ಪ್ರದೇಶದಲ್ಲಿ ಹೂತು ಹಾಕಲಾಗಿದೆ. ನಗರದ ಆನೇಕಲ್ ತಾಲೂಕಿನ… Read More

September 30, 2024

ರೈಲ್ವೇ ಇಲಾಖೆ : 14,298 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪುನಾರಂಭ

ಉದ್ಯೋಗ ಹಂಬಲಿಸುವವರಿಗೆ ಭಾರತೀಯ ರೈಲ್ವೇ ಇಲಾಖೆ ಸಂತೋಷದ ಸುದ್ದಿ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್ಬಿ) ತನ್ನ ಹಳೆಯ ನೇಮಕಾತಿಗಳನ್ನು… Read More

September 30, 2024

ಅಕ್ಕಿಯ ಬೆಲೆಯಲ್ಲಿ ಭಾರೀ ಏರಿಕೆಗೆ

ದೇಶಾದ್ಯಂತ ಅಕ್ಕಿಯ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, HMT, BPT ಮತ್ತು ಸೋನಮಸೂರಿ ಶ್ರೇಣಿಯ ಅಕ್ಕಿಯ ಬೆಲೆಗಳು ಪ್ರತಿ ಕ್ವಿಂಟಾಲ್ಗೆ 200… Read More

September 30, 2024

KSRTC ಬಸ್ ಕಂಟೈನರ್ ಗೆ ಡಿಕ್ಕಿಯಾಗಿ 20 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಮಂಡ್ಯ: ಬೆಂಗಳೂರಿನಿಂದ ಮಂಡ್ಯ ಕಡೆ ಸಾಗುತ್ತಿದ್ದ KSRTC ಬಸ್, ಬೆಳಗ್ಗೆ ಬೆಳಕಿನ ವೇಳೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಗೆ… Read More

September 30, 2024

ಕೆಲಸದ ಒತ್ತಡದಿಂದಾಗಿ ವ್ಯಕ್ತಿ ಆತ್ಮಹತ್ಯೆಗೆ ಶರಣು

ನವದೆಹಲಿ : ಕಂಪನಿಯ ತೀವ್ರ ಒತ್ತಡ ಮತ್ತು ಗುರಿಗಳನ್ನು ಪೂರೈಸದ ಒತ್ತಡದಿಂದಾಗಿ ಝಾನ್ಸಿಯ ಫೈನಾನ್ಸ್ ಕಂಪನಿಯೊಂದರ ಏರಿಯಾ ಮ್ಯಾನೇಜರ್ ಒಬ್ಬರು… Read More

September 30, 2024