ಎಸ್ ಐ ಕೋಡಿಹಳ್ಳಿಯಲ್ಲಿ 1473 ಜನರಿಗೆ ಮದ್ಯವರ್ಜನ ಶಿಬಿರ ಯಶಸ್ವಿ

Team Newsnap
1 Min Read

ಮಂಡ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ಎಸ್ ಐ ಕೋಡಿಹಳ್ಳಿಯ ಸಕ್ಕರೆ ಕಾರ್ಖಾನೆ ರೈತರ ಸಮುದಾಯ ಭವನದಲ್ಲಿ 1473 ಮದ್ಯವರ್ಜನ ಶಿಬಿರ ಕಾರ್ಯಕ್ರಮಕ್ಕೆ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಪಿ ಗಂಗಾಧರ ರೈ ಚಾಲನೆ ನೀಡಿದರು.‌

ಈ ವೇಳೆ ಮಾತನಾಡಿದ ರೈ ಅವರು,
ಧರ್ಮಸ್ಥಳದ ಚತುರ್ಮುಖ ದಾನಗಳಲ್ಲಿ ಮದ್ಯವರ್ಜನ ಶಿಬಿರವು ಅಭಯ ದಾನದ ಕಾರ್ಯಕ್ರಮದಲ್ಲಿ ಬರುತ್ತದೆ. ಮದ್ಯವ್ಯಸನಿ ಕೆಟ್ಟವನಲ್ಲ ಅವನ ವ್ಯಸನ ಕೆಟ್ಟದ್ದು ಮನಪರಿವರ್ತನೆ ಒಂದೇ ವ್ಯಸನದಿಂದ ಹೊರಬರಲು ಇರುವ ಏಕೈಕ ಮಾರ್ಗ ಪ್ರಪಂಚದಲ್ಲಿ ಮಧ್ಯವ್ಯಸನ ಬಿಡಲು ಮಾತ್ರ ಔಷಧಗಳಿಲ್ಲ ನಮ್ಮಲ್ಲಿ ಕೂಡ ಇಲ್ಲ ಆದರೆ ಕುಡಿತದಿಂದ ಹಾಗುವ ಸಮಸ್ಯೆಗಳಿಗೆ ನಮ್ಮ ಶಿಬಿರದಲ್ಲಿ ಮದ್ದು ಮಾತ್ರೆಗಳನ್ನು ನೀಡಿ ದೈಹಿಕ ವಾದ ಪರಿವರ್ತಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ತೈಲೂರು ವೆಂಕಟಕೃಷ್ಣ, ಅನನ್ಯ ಆರ್ಟ್ ಸಂಸ್ಥೆ ಅಧ್ಯಕ್ಷೆ ಅನುಪಮ, ಸುಜಾತಾ ರಮೇಶ್, ತಾಲೂಕು ಯೋಜನಾಧಿಕಾರಿ ನಾರಾಯಣ ಪಾಟಾಳಿ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಶಿಬಿರಾಧಿಕಾರಿ ದಿವಾಕರ್ ವೆಂಕಟೇಶ್ ಮೇಲ್ವಿಚಾರಕರಾದ ಲಕ್ಷ್ಮಣ್ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Share This Article
Leave a comment