ಮಂತ್ರಾಲಯದ ಗುರುರಾಯರ ಸನ್ನಿಧಿಯಲ್ಲಿ ಒಂದು ತಿಂಗಳಿಗೆ 1.97 ಕೋಟಿ ರು ಕಾಣಿಕೆ ಸಂಗ್ರಹ

Team Newsnap
1 Min Read

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.

ಜುಲೈ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದೆ ಒಟ್ಟು 1 ಕೋಟಿ 97 ಲಕ್ಷದ 21 ಸಾವಿರದ 825 ರೂಪಾಯಿ ಸಂಗ್ರಹವಾಗಿದೆ. ಸಂಗ್ರಹವಾದ ಕಾಣಿಕೆಯಲ್ಲಿ 4 ಲಕ್ಷದ 4 ಸಾವಿರದ 59 ರೂಪಾಯಿ ನಾಣ್ಯಗಳು ಹಾಗೂ 1 ಕೋಟಿ 93 ಲಕ್ಷದ 17 ಸಾವಿರದ 766 ರೂಪಾಯಿ ನೋಟುಗಳು ಸಂಗ್ರಹವಾಗಿದೆ.

16 ಗ್ರಾಂ ಬಂಗಾರ, 745 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯದ ಕುರಿತು ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಇದನ್ನು ಓದಿ – 72 ರೇಷ್ಮೆ ವಿಸ್ತಾರಣಾಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಸಚಿವ ನಾರಾಯಣಗೌಡ

ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಣಿಕೆ ಕಾರ್ಯ ಪೂರ್ಣಗೊಂಡಿದೆ.

Share This Article
Leave a comment