ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ರೈತರಿಗೆ ವಿರೋಧಿ ಆಗಿರುವುದನ್ನು ಖಂಡಿಸಿ ಸೆಪ್ಟೆಂಬರ್ ೨೫, ಶುಕ್ರವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ
ಕೃಷಿ ಮಸೂದೆಗಳನ್ನು ಅಂಗೀಕರಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮಗಳನ್ನು ವಿರೋಧಿಸಿ ಕೆಲವು ರೈತಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಅನೇಕ ರೈತರು ಹಾಗೂ ಉಳಿದ ರೈತಪರ ಸಂಘಟನೆಗಳು ಬಂದ್ ಕರೆಗೆ ಸಮ್ಮತಿಸಿವೆ ಎಂದು ತಿಳಿದು ಬಂದಿದೆ. ಆದ್ದರಿಂದ ಸೆಪ್ಟೆಂಬರ್ ೨೫ (ಶುಕ್ರವಾರ) ಕರ್ನಾಟಕ ಬಂದ್ ಆಗಲಿದೆಯಾ ಎಂಬ ಇನ್ನೂ ನಿರ್ದಿಷ್ಟವಾಗಿ ಗೊತ್ತಾಗಬೇಕಿದೆ.