ನ್ಯೂಸ್ ಸ್ನ್ಯಾಪ್.
ಬೆಂಗಳೂರು.
ಕೃಷಿಕರೊಬ್ಬರಿಗೆ ಅಡಕೆ ಮಾರಾಟದಿಂದ ಬಂದಿದ್ದ 26. 5 ಲಕ್ಷ ರು ಗಳನ್ನು ಪೊಲೀಸ್ ಎಸ್ ಐ ಹಾಗೂ ತಂಡ ದರೋಡೆ ಮಾಡಿದ ನಂತರ 6 ಲಕ್ಷ ರು ಲಂಚ ಪಡೆದು ಆರೋಪಿಗಳಿಗೆ ನೆರವಾದ ಎಸ್ ಜೆ ಪಾರ್ಕ್ ಇನ್ಸ್ ಪೆಕ್ಟರ್ ಯೋಗೀಶ್ ಅವರನ್ನು ಪೊಲೀಸ್ ಆಯುಕ್ತ ಅಮಾನತ್ತು ಮಾಡಿದ್ದಾರೆ. ಆರೋಪಿ ಸ್ಥಾನದಲ್ಲಿರುವ ಯೋಗಿಶ್ ಈಗ ಪರಾರಿಯಾಗಿದ್ದಾರೆ.
ದರೋಡೆ ಮಾಡಿದ ಹಣದಲ್ಲಿ ಸಬ್ ಇನ್ಸ್ ಪೆಕ್ಟರ್ ಜೀವನ್ ಕುಮಾರ್ ಹಾಗೂ ತಂಡವು ವೃತ್ತ ನಿರೀಕ್ಷಕ ಯೋಗಿಶ್ ಕೂಡ 6 ಲಕ್ಷ ರು ಪಾಲು ನೀಡಿದೆ. ದರೋಡೆಕೋರ ಎಸ್ ಐ ಜೀವನ್ ಕುಮಾರ್ ಈ ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಕೆ. ಆರ್. ಮಾರುಕಟ್ಟೆಯ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಸಲ್ಲಿಸಿದ ಪ್ರಾಥಮಿಕ ವರದಿಯ ಆಧಾರದ ಮೇಲೆ ಯೋಗಿಶ್ ಅವರನ್ನು ಅಮಾನತ್ತು ಮಾಡಲಾಗಿದೆ.
ಆ. 19 ರಂದು ತುಮಕೂರಿನ ತೆಂಗು – ಅಡಿಕೆ ವ್ಯಾಪಾರಿ ಮೋಹನ್ ಅವರಿಗೆ ಚಿಕ್ಕಪೇಟೆ ಅಂಗಡಿಯೊಂದರಲ್ಲಿ 26.5 ಲಕ್ಷ ರು ಬಾಕಿ ಕೊಡುವುದಿತ್ತು. ಈ ಹಣ ವಸೂಲಿ ಮಾಡಿಕೊಂಡು ಬರುವಂತೆ ಮಾಲೀಕ ಮೋಹನ್, ಕೆಲಸಗಾರಿಗೆ ಸೂಚಿಸಿದರು. ಅದರಂತೆ ಕೆಲಸಗಾರರು ಹಣ ಪಡೆದು ಕಾರಿನಲ್ಲಿ ಹಿಂತಿರುಗುವಾಗ ಎಸ್.ಜೆ.ಪಾರ್ಕ್ ಎಸ್ ಐ ಜೀವನ್ ಕುಮಾರ್, ಜ್ಞಾನ ಪ್ರಕಾಶ್ ತಮಡ ಅವರುಗಳು ಕಾರು ಅಡ್ಡಗಟ್ಟಿ 26 ಲಕ್ಷ ರು ಗಳನ್ನು ದರೋಡೆ ಮಾಡಿದ್ದರು. ನಂತರ ವ್ಯಾಪಾರಿ ಮೋಹನ್ ಹಣ ದರೋಡೆಯಾಗಿದೆ ಎಂದು ಕೆ ಆರ್ ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣದ ವಿಚಾರಣೆ ಮಾಡಿದ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದರು. ಈ ವಿಚಾರಣೆಯ ವೇಳೆ ಇನ್ಸ್ ಪೆಕ್ಟರ್ ಯೋಗಿಶ್ ಕೂಡ 6 ಲಕ್ಷ ರುಗಳನ್ನು ನೀಡಿರುವುದಾಗಿ ಜೀವನ್ ಕುಮಾರ್ ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಪೊಲೀಸ್ ಆಯುಕ್ತರು ಯೋಗಿಶ್ನನ್ನು ಅಮಾನತ್ತು ಮಾಡಿದರು. ಆರೋಪಿ ಯೋಗಿಶ್ ಪರಾರಿಯಾಗಿದ್ದಾರೆ. ಹುಡುಕಾಟ ನಡೆದಿದೆ.
ನಮ್ಮ ಪೋಲಿಸರು ಸಮರ್ಥರಿದ್ದಾರೆ ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More
ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್ಎಸ್ಎಲ್ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More
ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More
ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More
ಬೆಂಗಳೂರು:ಪೆನ್ಡ್ರೈವ್ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು… Read More
ಪುಣೆ : ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆಗೈದಿದ್ದ ಇಬ್ಬರಿಗೆ ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯ ಜೀವಾವಧಿ ಶಿಕ್ಷೆ… Read More
This website uses cookies.
Leave a Comment