ಅಗಲಿದ ವೀರಪುತ್ರ ರಾವತ್ ಗೆ ಇಂದು ಅಂತಿಮ ವಿದಾಯ -ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Team Newsnap
1 Min Read

ಶತ್ರುರಾಷ್ಟ್ರಗಳ ಚಳಿ ಬಿಡಿಸಿದ್ದ ರಾವತ್ ಹೆಲಿಕಾಪ್ಟರ್ ದುರಂತಕ್ಕೆ ಬಲಿಯಾಗಿದ್ದಾರೆ. ದೇಶದ ಮೊಟ್ಟಮೊದಲ ಸಿಡಿಎಸ್ ಈಗ ನಮ್ಮೊಂದಿಗಿಲ್ಲ. ಇಂದು ವೀರ ಸೇನಾನಿಯ ಅಂತಿಮಯಾತ್ರೆ ದೆಹಲಿಯಲ್ಲಿ ನಡೆಯಲಿದೆ.

ವೀರಪುತ್ರನ ಅಂತಿಮ ಯಾತ್ರೆ
ದೆಹಲಿಯ ಕಾಮ್​ರಾಜ್ ಮಾರ್ಗ್​ನ ಬಿಪಿನ್ ರಾವತ್ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 11ರಿಂದ 12.30ರವರೆಗೆ ಸಾರ್ವಜನಿಕರಿಂದ ಅಂತಿಮ ದರ್ಶನಕ್ಕೆ ಅವಕಾಶ ಕೊಡಲಾಗಿದೆ. ಮಧ್ಯಾಹ್ನ 12.30ರಿಂದ 1.30ರವರೆಗೆ ಸೇನಾ ಸಿಬ್ಬಂದಿಯಿಂದ ಗೌರವ ಸಲ್ಲಿಸಲಾಗುತ್ತೆ.

ಬಳಿಕ ಮಧ್ಯಾಹ್ನ 2 ಗಂಟೆಯಿಂದ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಲಿದೆ. ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್ ಅಂತಿಮ ಯಾತ್ರೆ ಕಾಮ್​ರಾಜ್ ಮಾರ್ಗ್​​ನ ನಿವಾಸದಿಂದ ಅಂತಿಮ ಯಾತ್ರೆ ಹೊರಡಲಿದೆ. ಇನ್ನು ಸಂಜೆ 4 ಗಂಟೆ ಸುಮಾರಿಗೆ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತೆ.
ಸದ್ಯ ಸಿಡಿಎಸ್​ ಬಿಪಿನ್​ ರಾವತ್​ ಮನೆಯ ಮುಂದೆ ಜನ ಸಾಗರವೇ ಹರಿದು ಬರ್ತಿದೆ. ಬಿಪಿನ್​ ರಾವತ್​ ಅವರ ಪೋಟೋ ಫ್ಲೆಕ್ಸ್​ಗಳನ್ನು ಹಿಡಿದು ಅವರ ಮನೆ ಮುಂದೆ ದೌಡಾಯಿಸ್ತಿದ್ದಾರೆ.

ಬಿಪಿನ್ ರಾವತ್ ಅಮರ್ ರಹೇ ಎಂಬ ಘೋಷಣೆಗಳನ್ನು ಮೊಳಗಿವೆ . ಮುನ್ನೆಚ್ಚರಿಕಾ ಕ್ರಮವಾಗಿ ಬಿಪಿನ್​ ನಿವಾಸದ ಬಳಿ ಈಗಾಗಲೇ ಬಿಗಿ ಭದ್ರತೆ ಒದಗಿಸಲಾಗಿದೆ.

Share This Article
Leave a comment