January 28, 2026

Newsnap Kannada

The World at your finger tips!

images

ನಾಳೆಯಿಂದ ದೇವಾಲಯಗಳಲ್ಲಿ ಸೇವೆ ಉಂಟು, ಅನ್ನದಾನವಿಲ್ಲ

Spread the love


ನಾಳೆಯಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಆರಂಭಿಸಲು ಸೂಚಿಸಲಾಗಿದೆ. ಆದರೆ ಅನ್ನದಾನಕ್ಕೆ ಮಾತ್ರ ಅವಕಾಶವಿಲ್ಲ ಮಾತ್ರವಲ್ಲ ಯಾವುದೇ ರೀತಿಯ ಸಭೆ
ಸಮಾರಂಭವನ್ನೂ ಕೂಡ ಮಾಡುವಂತಿಲ್ಲ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪೂಜಾರಿ ಆರೋಗ್ಯ ಇಲಾಖೆ ಅನುಮತಿ ಪಡೆದುಕೊಂಡು ನಾಳೆಯಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ
ಆರಂಭಿಸಲಿದ್ದೇವೆ. ಕೊರೋನಾ ಮಾರ್ಗ ಸೂಚಿಯಂತೆ ನೂರಾರು ಜನರು ಸೇರಲು ಅವಕಾಶವಿಲ್ಲ. ಬದಲಿಗೆ 10-15 ಜನರು ಸೇವೆ ಧಾರ್ಮಿಕ ಸೇವೆ ಮಾಡಲು ಅಡ್ಡಿಯಿಲ್ಲ.
ಸಾಮೂಹಿಕ ಅನ್ನದಾನವನ್ನು ಮಾಡುವುದಕ್ಕೆ ಅನುಮತಿ ಇಲ್ಲ ಎಂದರು.

error: Content is protected !!